ಎಚ್ಚರಿಕೆ ಅಗತ್ಯ: ‘ಕಾಳಿ ನದಿಗೆ ಕೊಡಸಳ್ಳಿಯಲ್ಲಿ ಅಣೆಕಟ್ಟೆ ನಿರ್ಮಾಣದ ಸಂದರ್ಭ ನಿರಾಶ್ರಿತರಾದವರಿಗೆ ಈ ಭಾಗದಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ. ಹಾಗಾಗಿ ಇಲ್ಲಿ ಜನ, ಜಾನುವಾರು ಓಡಾಟವಿದೆ. ನದಿಯಲ್ಲಿ ಈಜಲು, ಮೀನು ಹಿಡಿಯಲು ಯುವಕರು, ಮಕ್ಕಳು ಬರುತ್ತಾರೆ. ಮೊಸಳೆಗಳು ಪದೇ ಪದೇ ತಮ್ಮ ಇರುವಿಕೆಯನ್ನು ತೋರಿಸುತ್ತಿರುವ ಕಾರಣ, ಇಲ್ಲಿಗೆ ಬರುವವರು ಎಚ್ಚರಿಕೆ ವಹಿಸಬೇಕು’ ಎನ್ನುವುದು ಕಣ್ಣಿಪಾಲದ ದತ್ತಾತ್ರೇಯ ಅವರ ಸಲಹೆಯಾಗಿದೆ.