ಯೋಜನೆಯ ಅನ್ವಯ ಯಾವ ಬೆಳೆಗಳು ಮತ್ತು ಕೃಷಿ ಪ್ರದೇಶಗಳು ವಿಮೆಗೆ ಒಳಪಡುತ್ತವೆ ಎನ್ನುವುದನ್ನು ಹವಾಮಾನ, ಕಂದಾಯ, ಅಂಕಿ– ಸಂಖ್ಯೆ ಹಾಗೂ ಕೃಷಿ ಇಲಾಖೆಗಳು ಸಮೀಕ್ಷೆ ಮಾಡಿ ನಿರ್ಧರಿಸುತ್ತವೆ. ಆ ರೀತಿ ಯೋಜನೆಗೆ ಒಳಪಟ್ಟ ಜಮೀನುಗಳ ರೈತರು ತಮ್ಮ ಪಹಣಿ ಪತ್ರಿಕೆ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ಬುಕ್ ಮೊದಲಾದವುಗಳನ್ನು ನೀಡಿ ಬ್ಯಾಂಕಿನವರಿಗೆ ಸಲ್ಲಿಸಿದ್ದರು. ಇದನ್ನು ಆಧರಿಸಿ ಅವರಿಗೆ ಪರಿಹಾರ ದೊರೆಯಬೇಕಿತ್ತು.