ಪರೀಕ್ಷಾ ಕೇಂದ್ರಕ್ಕೆ ಬಾಲಕಿಯನ್ನು ಕರೆದುಕೊಂಡು ಬಂದಿದ್ದ ಶಿವಳ್ಳಿ ಅವರ ಕಾರಿನ ಚಾಲಕ ದ್ಯಾಮಣ್ಣ ಮಡಿವಾಳರ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಸಾಹೇಬರ ಪಾರ್ಥೀವ ಶರೀರದೊಂದಿಗೆ ಇಡೀ ಕುಟುಂಬ ನಿನ್ನೆಯೇ ಯರಗುಪ್ಪಿಗೆ ತೆರಳಿದ್ದಾರೆ. ಹುಬ್ಬಳ್ಳಿಯ ಅವರ ಮನೆಯಲ್ಲಿ ಸಚಿವರ ಮೂವರು ಮಕ್ಕಳು ಮಾತ್ರ ಇದ್ದರು. ತಂದೆಯನ್ನು ಕಳೆದುಕೊಂಡ ದುಃಖದಲ್ಲಿ ತೀವ್ರ ನೊಂದುಕೊಂಡಿರುವ ಆಕೆ ರಾತ್ರಿಯಿಡೀ ಮಲಗಲಿಲ್ಲ, ಹೊಟ್ಟೆಗೂ ಏನನ್ನೂ ತಿಂದಿಲ್ಲ. ಪರೀಕ್ಷೆ ಬರೆಯುತ್ತೇನೆ ಎಂದು ಆಕೆಯೇ ಇಚ್ಛಿಸಿದ ಹೇಳಿದ ಕಾರಣ ಕರೆದುಕೊಂಡು ಬರಲಾಗಿದೆ’ ಎಂದು ಹೇಳಿದರು.