‘ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದ ಸರ್ಕಾರದಲ್ಲಿ ಅನುದಾನ ಹಂಚಿಕೆ ಸರಿಯಾಗಿ ನಡೆದಿತ್ತಾ ಎಂಬುದನ್ನು ಜೆಡಿಎಸ್ ಪ್ರಶ್ನಿಸಿಕೊಳ್ಳಲಿ. ಒಂದೆಡೆ ಸಿಕ್ಕಾಪಟ್ಟೆ ಅನುದಾನ ನೀಡಿ, ಮತ್ತೊಂದಡೆ ಏನು ಕೊಟ್ಟಿಲ್ಲ. ಈ ಅಸಮತೋಲನ ಸರಿಪಡಿಸಲು ಅನುದಾನ ಮರುಹಂಚಿಕೆ ಮಾಡಲಾಗಿದೆ. ರಾಜ್ಯದಲ್ಲಿ 30 ಜಿಲ್ಲೆಗಳಿವೆ, ಮೂರು ಜಿಲ್ಲೆ ಸೇರಿ ರಾಜ್ಯವಾಗಲು ಸಾಧ್ಯವಿಲ್ಲ’ ಎಂದು ಅನುದಾನ ಹಂಚಿಕೆಗೆ ಸಂಬಂಧಿಸಿದ ದೇವೇಗೌಡರ ಆರೋಪಕ್ಕೆ ತಿರುಗೇಟು ನೀಡಿದರು.