‘ಸಾಲ ಮಾಡಿಕೊಂಡು ರಂಗ ಚಟುವಟಿಕೆ ನಡೆಸಿದವರು ಬಡ್ಡಿ ಕಟ್ಟಲೂ ಸಾಧ್ಯವಾಗದೇ ಒದ್ದಾಡುತ್ತಿದ್ದಾರೆ. ಸಾಣೇಹಳ್ಳಿಯ ರಂಗಶಾಲೆ, ಶಿವಸಂಚಾರ, ಮಕ್ಕಳ ರಂಗ ತರಬೇತಿ, ಮಾಸಿಕ ನಾಟಕ ಇತ್ಯಾದಿಗಾಗಿ ನಾವು ಪ್ರತಿವರ್ಷ ₹ 1 ಕೋಟಿಗೂ ಹೆಚ್ಚಿನ ಹಣ ವಿನಿಯೋಗಿಸುತ್ತಿದ್ದೇವೆ. ಎರಡು ವರ್ಷಗಳಿಂದ ಸರ್ಕಾರದ ಸಹಾಯಧನ ಬಾರದಿದ್ದರೆ ಅವುಗಳನ್ನು ನಡೆಸಿಕೊಂಡು ಹೋಗುವುದು ಹೇಗೆ?’ ಎಂದು ಪ್ರಶ್ನಿಸಿದ್ದಾರೆ.