ಆಕ್ಷೇಪಣೆ ಏನಿತ್ತು?:
’ಎನ್ಐಎ ಯಾವುದೇ ಪ್ರಕರಣದ ತನಿಖೆ ನಡೆಸಬೇಕಾದರೆ ಅಂತಹ ಪ್ರಕರಣ ಅಕ್ರಮ ಕೂಟ ಕಾಯ್ದೆ–1967ರ ಅನುಸಾರ ಅದರಲ್ಲಿನ ಷೆಡ್ಯೂಲ್ಡ್ (ಪಟ್ಟಿ ಮಾಡಲಾಗಿರುವ) ಅಪರಾಧ ಪ್ರಕರಣ ಸ್ವರೂಪ ಹೊಂದಿರಬೇಕು. ಆದರೆ ಇದೊಂದು ಕೊಲೆ ಪ್ರಕರಣ. ಸುಮ್ಮನೇ ಇದಕ್ಕೆ ಭಯೋತ್ಪಾದಕರ ಬಣ್ಣ ಕಟ್ಟಲಾಗಿದೆ’ ಎಂದು ಆಕ್ಷೇಪಿಸಿ ಆರೋಪಿಗಳಾದ ಅಸೀಂ ಶರೀಫ್, ಇರ್ಫಾನ್ ಪಾಷ, ವಸೀಂ ಅಹಮದ್, ಮೊಹಮದ್ ಸಾದಿಕ್, ಮೊಹಮದ್ ಮುಜೀಬುಲ್ಲಾ ಹೈಕೋರ್ಟ್ ಮೆಟ್ಟಿಲೇರಿದ್ದರು.