'ಕೃಷಿಯನ್ನು ನಂಬಿ ಹಾಗೂ ತಮ್ಮ ಆನಾದಿಕಾಲದ ವೃತ್ತಿ ಜೀವನವಾದ ಕುರಿ ಸಾಕಿಕೊಂಡು ಜೀವನ ಮಾಡುತ್ತಿದ್ದೇವೆ. ನಮ್ಮವು ಒಂದಷ್ಟು ಕುರಿಗಳಿವೆ. ಈಗಾಗಲೇ ರುಚಿ ನೋಡಿರುವ ಚಿರತೆ ಅವುಗಳ ಮೇಲೆ ಎಲ್ಲಿ ದಾಳಿ ಮಾಡುತ್ತದೆಯೋ ಎನ್ನುವ ಆತಂಕದಲ್ಲಿ ದಿನ ಕಳೆಯುತ್ತಿದ್ದೇವೆ' ಎನ್ನುತ್ತಾರೆ ಹುಚ್ಚಪ್ಪ. 'ದಾಳಿಯಾದ ವ್ಯಕ್ತಿಗೆ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿ ದ್ದೇವೆ. ದಾಳಿಗೊಳಗಾದ ಕುರಿ ಸತ್ತರೆ ₹5 ಸಾವಿರ ಪರಿಹಾರ ಕೊಡಲಾಗುವುದು. ಚಿರತೆ ಹಿಡಿಯುವ ಪ್ರಯತ್ನ ಮಾಡ ಲಾಗುವುದು’ ಎಂದು ಅರಣ್ಯ ರಕ್ಷಕ ಶ್ರೀನಾಥ್ ಮಾಹಿತಿ ನೀಡಿದರು.