ಸಿದ್ದಪ್ಪನ ತಂದೆ ಸಂಗಪ್ಪ, ಪತ್ನಿ ವಿಶಾಲ ಅವರು ಆಕಳು ಪಾಲನೆ, ಪೋಷಣೆ ಮಾಡಿ, ಹಾಲು ಕರೆದು, ಕೆಎಂಎಫ್ಗೆ ನಿತ್ಯ 25 ಲೀಟರ್ ಹಾಲು ಹಾಕುತ್ತಾರೆ. ಈಗ ತಿಮ್ಮಾಪುರ ಗ್ರಾಮಕ್ಕೆ ಹೋಗಿ ಹಾಲು ಹಾಕಬೇಕಿದ್ದು, ಕೆಎಂಎಫ್ನವರು ಇಲ್ಲಿಗೆ ಬಂದು ಸಂಗ್ರಹಿಸಿದರೇ ಓಡಾಟ ತಪ್ಪುತ್ತದೆ ಎಂಬುದು ಸಿದ್ದಪ್ಪನ ಬೇಡಿಕೆ. ಹಸುಗಳ ಆರೋಗ್ಯ ಮೇಲ್ವಿಚಾರಣೆಗೆ ಪಶು ಸಂಗೋಪನೆ ಇಲಾಖೆಯ ವೈದ್ಯರು ಸಹಕಾರ ನೀಡುತ್ತಿದ್ದಾರೆ ಎಂದು ಸಿದ್ದಪ್ಪ ಸ್ಮರಿಸಿದರು.