‘ಶುಕ್ರವಾರ ಬೆಳಿಗ್ಗೆ ನನ್ನ ಸೋದರಿ ಅನಸೂಯಮ್ಮ ತಿಪ್ಪೆಗೆ ಕಸ ಹಾಕಲು ಹೋದಾಗ ಅವರ ಮೇಲೆ ಹಲ್ಲೆ ಮಾಡಲಾಗಿದೆ. ಇದನ್ನು ತಡೆಯಲು ಹೋದಾಗ ಸವರ್ಣೀಯರಾದ ಕೃಷ್ಣಪ್ಪ, ನಾರಾಯಣಸ್ವಾಮಿ, ಚಂದ್ರ, ಭೈರೇಗೌಡ, ನಂಜಪ್ಪ ದೊಣ್ಣೆಗಳಿಂದ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ್ದಾರೆ. ಮರಕ್ಕೆ ಕಟ್ಟಿಹಾಕಿ ಕೊಲೆ ಬೆದರಿಕೆ ಹಾಕಿದ್ದಾರೆ’ ಎಂದು ನಾರಾಯಣಸ್ವಾಮಿ ಆರೋಪಿಸಿದ್ದಾರೆ.