ಪ್ರಣಾಳಿಕೆ ಬಿಡುಗಡೆ ಮಾಡಿದ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ‘ರಾಜಕೀಯದಲ್ಲಿ ಹಣವೇ ಪ್ರಾಧಾನ್ಯ ಪಡೆಯುತ್ತಿದೆ. ಹಣ ಹಾಗೂ ಅಧಿಕಾರ ಪಡೆಯಲು ರಾಜಕಾರಣಿಗಳು ಏನು ಬೇಕಾದರೂ ಮಾಡಲು ಸಿದ್ಧರಿದ್ದಾರೆ. ಹಣಕ್ಕಾಗಿ ಕೊಲೆ, ನೈಸರ್ಗಿಕ ಸಂಪತ್ತು ಲೂಟಿಯಾಗುತ್ತದೆ. ಚುನಾವಣೆಯ ನಂತರ ಏನು ಮಾಡುತ್ತೇವೆ ಎಂದು ಹೇಳುವ ಪೊಳ್ಳು ಭರವಸೆಯ ಪ್ರಣಾಳಿಕೆ ಇದಲ್ಲ. ಬದಲಾಗಿ ದೇಶದ ಅಭಿವೃದ್ಧಿಗೆ, ಮುಂದಿನ ಪೀಳಿಗೆಯ ಏಳ್ಗೆಗಾಗಿ ನಾವು ಏನು ಮಾಡಬಹುದು ಎನ್ನುವ ಚಿಂತನೆಯನ್ನು ಹುಟ್ಟುಹಾಕುತ್ತದೆ’ ಎಂದರು.