ಬನ್ನೇರುಘಟ್ಟ, ಹೆಬ್ಬಾಳ, ಅಗ್ರಹಾರ ದಾಸರಹಳ್ಳಿ, ಜೆ.ಸಿ. ನಗರ, ಆರ್.ಟಿ. ನಗರ, ಪ್ಯಾಲೆಸ್ ಗುಟ್ಟಹಳ್ಳಿ, ಹಲಸೂರು, ಮತ್ತಿಕೆರೆ, ನಂದಿನಿ ಲೇಔಟ್, ಮಲ್ಲೇಶ್ವರ ಹಾಗೂ ನಗರದ ಇತರ ಭಾಗಗಳಿಂದ ಹೊರಟ ಅದ್ದೂರಿ ಮೆರವಣಿಗೆ ಎಲ್ಲರ ಕಣ್ಮನ ತಣಿಸಿದವು. ಕೀಲುಕುದುರೆ ಮತ್ತು ಮರಗಾಲು ಕುಣಿತ, ವೀರಗಾಸೆ, ತಂಜಾವೂರು ಕುಣಿತ, ಹುಲಿವೇಷ, ನಂದಿಧ್ವಜ, ಗಾರುಡಿ ಗೊಂಬೆಗಳು ಮೆರವಣಿಗೆಗೆ ಮೆರುಗು ತಂದವು.