ಬೆಳಿಗ್ಗೆ 9 ಗಂಟೆಗೆ ನಗರದ ಬಸವನಹಳ್ಳಿ ಮುಖ್ಯರಸ್ತೆಯ ಶಂಕರಮಠದಿಂದ ಶೋಭಾಯಾತ್ರೆ ಹೊರಡಲಿದೆ. ಹನುಮಂತಪ್ಪ ವೃತ್ತ, ಎಂ.ಜಿ.ರಸ್ತೆ ಮೂಲಕ ಹಾದು ಬೋಳರಾಮೇಶ್ವರ ದೇಗುಲ ಆವರಣ ತಲುಪಲಿದೆ. ಅಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ಸ್ವಾಮೀಜಿಗಳು, ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಮುಖಂಡರು, ದತ್ತ ಭಕ್ತರು ಪಾಲ್ಗೊಳ್ಳುವರು. ಸಭೆ ನಂತರ ದತ್ತಪೀಠಕ್ಕೆ ತೆರಳುವರು.