ಇದಕ್ಕೂ ಮೊದಲು ಜೋಳದಾಳ್ನಿಂದ ತಂದಿಟ್ಟಿದ್ದ ಪವಿತ್ರ ಗಂಧವನ್ನು ಅತ್ತಿಗುಂಡಿಯಿಂದ ಮೆರವಣಿಗೆಯಲ್ಲಿ ಬಾಬಾಬುಡನ್ಗಿರಿಗೆ ಮೆರವಣಿಗೆಯಲ್ಲಿ ತಂದರು. ಗಿರಿಗೆ ಗಂಧವು ಗಂಧ ತಲುಪುತ್ತಿದ್ದಂತೆ ಭಕ್ತರು ನಾಣ್ಯಗಳನ್ನು ಚಿಮ್ಮಿ ಹರಕೆ ಸಲ್ಲಿಸಿದರು. ಭಕ್ತರು ಸಾಲಾಗಿ ಗುಹೆಯೊಳಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಆಂಧ್ರಪ್ರದೇಶ, ಮಹಾರಾಷ್ಟ್ರ, ಕೇರಳ ಸಹಿತ ರಾಜ್ಯದ ವಿವಿಧೆಡೆಗಳಿಂದ ಗಿರಿಗೆ ಭಕ್ತರು ಬಂದಿದ್ದಾರೆ. ಶನಿವಾರ ಫಕೀರರು, ಶಾಖಾದ್ರಿ ದರ್ಬಾರ್ ಸಭೆ ನಡೆಯಲಿದೆ. ಭಾನುವಾರದವರೆಗೆ ಉರೂಸ್ ನಡೆಯಲಿದೆ.