ಸಭೆಯ ಆರಂಭದಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಶಿವನಹಳ್ಳಿ ರಮೇಶ್, ‘ದೇಶಕ್ಕಾಗಿ ಮಡಿದ ವೀರ ಯೋಧರ ಕುಟುಂಬಕ್ಕೆ ನೆರವಾಗುವುದು ನಮ್ಮೆಲ್ಲರ ಕರ್ತವ್ಯ. ಹೀಗಾಗಿ 41 ಸದಸ್ಯರ ಒಂದು ತಿಂಗಳ ₹ 6000 ಗೌರವಧನ ಸೇರಿ ಒಟ್ಟು ₹ 2.46 ಲಕ್ಷವನ್ನು ಕೊಡುವ ಮೂಲಕ ನೈತಿಕ ಸ್ಥೈರ್ಯ ತುಂಬಬೇಕು’ ಎಂದು ಮನವಿ ಮಾಡಿದಾಗ ಉಳಿದ ಸದಸ್ಯರು ಮೇಜು ಬಡಿಯುವ ಮೂಲಕ ಒಪ್ಪಿಗೆ ಸೂಚಿಸಿದರು.