ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಜಾನುವಾರು ಪ್ರದರ್ಶನ ಏರ್ಪಡಿಸಿದರೆ ಜೂಲಿಯಾ ತೆಗೆದುಕೊಂಡು ಭಾಗವಹಿಸುತ್ತೇವೆ. ಸಿಂಧನೂರಿನಲ್ಲಿ ನಡೆದ ಮೇಳದಲ್ಲಿ ಬಹಳಷ್ಟು ರೈತರು ಬಂದಿದ್ದರು. ನೋಡಿದವರೆಲ್ಲ ಖುಷಿ ವ್ಯಕ್ತಪಡಿಸಿದ್ದಾರೆ. ಜೂಲಿಯಾ ಮೇಲೆ ಜನರ ಕಣ್ಣು ಬಿದ್ದಿದೆ. ಹೀಗಾಗಿ ಜೂಲಿಯಾ ಮೇವು ತಿನ್ನುತ್ತಿಲ್ಲ. ಮೇಳ ಮುಗಿಯುತ್ತಿದ್ದಂತೆ ಪಶು ವೈದ್ಯರಿಗೆ ತೋರಿಸುತ್ತೇನೆ ಎಂದರು.