‘ಕಲ್ಪತರು ನಾಡು, ತುಮಕೂರಿನ ಜನತೆಗೆ ನನ್ನ ನಮಸ್ಕಾರಗಳು. ನಡೆದಾಡುವ ದೇವರು ಸಿದ್ದಗಂಗಾ ಸ್ವಾಮೀಜಿಗಳಿಗೆ ಭಕ್ತಿಪೂರ್ವಕ ಪ್ರಣಾಮಗಳು. ಈ ಮಣ್ಣಿನಲ್ಲಿ ಜನಿಸಿದ ಎಲ್ಲ ಮಹನೀಯರಿಗೆ ನನ್ನ ಪ್ರಣಾಮಗಳು’ ಎಂದು ಕನ್ನಡದಲ್ಲಿ ಮಾತನಾಡಿದ ಅವರು, ‘ಪೊಕ್ರಾನ್ ಅಣುಶಕ್ತಿ ಪರೀಕ್ಷೆಯಲ್ಲಿ ಪ್ರಮುಖ ಪಾತ್ರವಹಿಸಿದ ಡಾ. ರಾಜಾರಾಮಣ್ಣ ಇಲ್ಲಿನವರು. ಗುಬ್ಬಿ ವೀರಣ್ಣ, ಜಕಣಾಚಾರಿ ಇಲ್ಲಿನವರು. ಇವರ ಬಗ್ಗೆ ಹೆಮ್ಮ ಇದೆ’ ಎಂದು ಸ್ಮರಿಸಿದರು.