ಪ್ರಕರಣದ ವಿವರ: ಡಾ.ಈಶ್ವರಯ್ಯ ಅವರು ಬಟವಾಡಿ ಮಹಾಲಕ್ಷ್ಮಿ ಬಡಾವಣೆಯ ನಿವಾಸಿಯಾಗಿದ್ದರು. ಡಿಸೆಂಬರ್ 9ರಂದು ಸಂಜೆ ಎಂದಿನಂತೆ ವಾಯುವಿಹಾರಕ್ಕೆ ತೆರಳಿದ್ದವರು ನಂತರ ಮನೆಗೆ ಬಂದಿರಲಿಲ್ಲ. ಆ ದಿನ ರಾತ್ರಿ ಮತ್ತು ಮರುದಿನ ನಗರ ಮತ್ತು ಸುತ್ತಮುತ್ತ ಅವರ ಪುತ್ರ ಪವನ್ ಅವರು ಸಂಬಂಧಿಕರು, ಸ್ನೇಹಿತರೊಂದಿಗೆ ಹುಡುಕಿದ್ದರು. ಆದರೆ, ಪತ್ತೆಯಾಗಿರಲಿಲ್ಲ.