‘ಸೆಕ್ಯುಲರ್ ಭಾರತಕ್ಕೆ ಸತ್ಯ ತಿಳಿದಿರಬೇಕು’ (ಪ್ರ.ವಾ., ಮಾ. 15) ಲೇಖನದಲ್ಲಿ ಎ. ಸೂರ್ಯಪ್ರಕಾಶ್ ಅವರು, ‘ಭಾರತದ ಮಧ್ಯ ಯುಗದ ಇತಿಹಾಸದಲ್ಲಿ ಆಗಿನ ಮುಸ್ಲಿಂ ಅರಸರಿಂದ ಹಿಂದೂ ಸಮಾಜದವರ ಮೇಲೆ ನಡೆದ ಹಿಂಸಾಚಾರಗಳನ್ನು ನಮ್ಮ ಎಡಪಂಥೀಯ ವಿದ್ವಾಂಸರು ಮರೆಮಾಚುತ್ತಾ ಬಂದಿದ್ದಾರೆ. ಇಂದಾದರೂ ಆ ವಿಷಯದ ಬಗ್ಗೆ ಜನರಿಗೆ ಸತ್ಯ ತಿಳಿಸಬೇಕು’ ಎಂದು ಹೇಳಿದ್ದಾರೆ. ‘ಭಾರತಕ್ಕೆ ಸತ್ಯ ಗೊತ್ತಿರಬೇಕು. ಅದರ ಜೊತೆ ಸಹಬಾಳ್ವೆ ರೂಢಿಸಿಕೊಳ್ಳಬೇಕು’ ಎಂಬುದು ಅವರ ಸಲಹೆ.