ಒಂದೆಡೆ, ರಾಜಕೀಯ ಪಕ್ಷಗಳು ಜಾತಿವಾರು ಮತಬ್ಯಾಂಕ್ನ ಬಂಡವಾಳ ಹೂಡಿಕೆ ಮಾಡುತ್ತಿವೆ. ಮತ್ತೊಂದೆಡೆ, ಪಕ್ಷಗಳ ಹುನ್ನಾರ ಅರಿಯದ ಮತದಾರ ತನ್ನ ಪವಿತ್ರವಾದ ಮತವನ್ನು ವಿವೇಚನಾರಹಿತವಾಗಿ ಚಲಾಯಿಸಿ, ರಾಜ್ಯದ ಅಭಿವೃದ್ಧಿಗೆ ಬೇಕಾದ ಒಳ್ಳೆಯ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಕಳೆದುಕೊಳ್ಳುತ್ತಾನೇನೋ ಎಂಬ ಅನುಮಾನ ಕಾಡತೊಡಗಿದೆ.