ಉಚ್ಚಂಗಿದುರ್ಗ: ಉಚ್ಚೆಂಗೆಮ್ಮ ದೇವಿ ಕ್ಷೇತ್ರಕ್ಕೆ ಮುತ್ತೈದೆ ಹುಣ್ಣಿಮೆ ಅಂಗವಾಗಿ ದೇವಿಯ ದರ್ಶನಕ್ಕೆ ಬಂದಿದ್ದ ಮಾಜಿ ದೇವದಾಸಿಯೊಬ್ಬರು ಸ್ವಯಂಪ್ರೇರಿತರಾಗಿ ಜಡೆ ಕತ್ತರಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.
ದಾವಣಗೆರೆ ತಾಲ್ಲೂಕಿನ ಶಾಮನೂರು ಗ್ರಾಮದ ಮಹಿಳೆ ಚೌಡಮ್ಮ (52) ಜಿಡ್ಡುಗಟ್ಟಿದ ಜಡೆ ತೆಗೆಸಿಕೊಂಡರು.
ದೇವದಾಸಿ ಪುನರ್ವಸತಿ ಕಾರ್ಯಕರ್ತರು ಸ್ಚಚ್ಛತೆ ಇಲ್ಲದಿರುವುದರಿಂದ ಕೂದಲು ಗಂಟು ಕಟ್ಟಿಕೊಂಡು ಜಡೆ ಬೆಳೆಯುತ್ತದೆ.
ದೇವಿ ಜಟೆ ರೂಪದಲ್ಲಿ ಬರುವುದಿಲ್ಲ ಎಂದು ಮೈಕ್ನಲ್ಲಿ ಕೇಳಿದ ಘೋಷಣೆಯಿಂದ ಪ್ರೇರಣೆಗೊಂಡು ಜಡೆ ಕತ್ತರಿಸಿ ಕೊಂಡಿದ್ದಾರೆ. ಚೌಡಮ್ಮನಿಗೆ ಉಡಿ ತುಂಬಿ ಗೌರವಿಸಲಾಯಿತು