‘ಓದು, ಚರ್ಚೆ, ಸಂವಾದಗಳೊಂದಿಗೆ ಹಳೆಗನ್ನಡ ಕಾವ್ಯದ ಗಮಕ-ವ್ಯಾಖ್ಯಾನ, ಜಾನಪದ ಕಲಾ ಪ್ರದರ್ಶನಗಳನ್ನು ಒಳಗೊಳ್ಳುವ ಮತ್ತು ಇಂದಿನ ಕನ್ನಡ ಸಾಹಿತ್ಯ-ಸಂಸ್ಕೃತಿಗಳ ಜ್ವಲಂತ ಸಮಸ್ಯೆಗಳ ಚಿಂತನವು ಮೂರು ದಿನಗಳ ಕಾಲ ನಡೆಯಲಿದೆ. ಒಟ್ಟು 15 ಗೋಷ್ಠಿಗಳು ಜರುಗಲಿವೆ. ಕನ್ನಡದ ವಿವಿಧ ಪೀಳಿಗೆಗೆ ಸೇರಿದ ಸುಮಾರು 200 ಸಾಹಿತಿಗಳು ಇದರಲ್ಲಿ ಭಾಗವಹಿಸಲಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.