ಹಾಸನ: ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯೊಂದರಲ್ಲಿ ಅಕ್ಷರ ದಾಸೋಹದ ಕೊಠಡಿ ಗೋಡೆ ಒಡೆದು ಗ್ಯಾಸ್ ಸಿಲಿಂಡರ್ ಮತ್ತು ಅಡುಗೆ ಪಾತ್ರೆಗಳನ್ನು ಕಳ್ಳತನ ಮಾಡಿದವನಿಗೆ ಹಾಸನದ 1ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ 4 ವರ್ಷ ಕಠಿಣ ಶಿಕ್ಷೆ ವಿಧಿಸಿದೆ.
ತಾಲ್ಲೂಕಿನ ನಿಟ್ಟೂರು ಗ್ರಾಮದ ಪುನೀತ್ ಕುಮಾರ್ ಶಿಕ್ಷೆಗೆ ಒಳಗಾದ ಅಪರಾಧಿ. 2014ರ ಆ.8 ರಂದು ರಾತ್ರಿ ಕೃಷ್ಣನಗರದ ಉರ್ದು ಶಾಲೆಯಲ್ಲಿ ಕಳ್ಳ
ತನ ಮಾಡಿದ್ದ. ಗ್ಯಾಸ್ ಸಿಲಿಂಡರನ್ನು ಅರುವನಹಳ್ಳಿ ಹತ್ತಿರದ ಅರಣ್ಯದಲ್ಲಿ ಮುಚ್ಚಿಟ್ಟಿದ್ದ. ಪಾತ್ರೆಗಳನ್ನು ಜಜ್ಜಿ ₹ 200ಕ್ಕೆ ಮಾರಾಟ ಮಾಡಿದ್ದ.
ಈ ಬಗ್ಗೆ ಹಾಸನದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.