ಶಿವಮೊಗ್ಗ ಲೋಕಸಭಾ ಕ್ಷೇತ್ರ ಯಡಿಯೂರಪ್ಪ ಕುಟುಂಬದ ಆಸ್ತಿಯೇ? ಅಪ್ಪ, ತಪ್ಪಿದರೆ ಮಗ ಜಾಹಗೀರು ಪಡೆದುಕೊಂಡಿದ್ದಾರೆಯೇ? ಈ ಬಾರಿ ಮಧು ಬಂಗಾರಪ್ಪ ಗೆಲುವು ನಿಶ್ಚಿತ. ಎರಡೂ ಪಕ್ಷಗಳು ಒಟ್ಟಾಗಿ ಅವರ ಪರ ನಿಲ್ಲುತ್ತೇವೆ.ಉಪ ಚುನಾವಣೆಯ ಹೊಂದಾಣಿಕೆ ಸಮ್ಮಿಶ್ರ ಸರ್ಕಾರದ ಸಂಬಂಧ ಮತ್ತಷ್ಟು ಗಟ್ಟಿ ಮಾಡಿದೆ. ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು ಬಿಜೆಪಿ ಮಣಿಸಲು ಈ ಚುನಾವಣೆ ಸಹಕಾರಿಯಾಗಿದೆ ಎಂದರು.