ಸರ್ಕಾರದ ಕಾರ್ಯವೈಖರಿ ಸರಿಯಿಲ್ಲ, ನಾಯಕರ ವರ್ತನೆ ಸಹಿಸಲಾಗುತ್ತಿಲ್ಲ ಎಂದೆಲ್ಲ ಕಾರಣ ನೀಡಿದ್ದ ಭಿನ್ನಮತೀಯ ಶಾಸಕರ ಬಂಡಾಯದ ಹಿಂದೆ ಸಚಿವರಾಗುವ ಆಸೆ ಇದ್ದದ್ದು ಬಹಿರಂಗ ಸತ್ಯ.ರಾಜೀನಾಮೆ ನೀಡಿ, ಬಿಜೆಪಿ ಸರ್ಕಾರದಲ್ಲಿ ಸಚಿವರಾಗುವುದು, ಆ ಮೂಲಕವೇ ಉಪ ಚುನಾವಣೆ ಎದುರಿಸುವುದು ಭಿನ್ನಮತೀಯರ ಉದ್ದೇಶವಾಗಿತ್ತು. ಆದರೆ, ಸ್ಪೀಕರ್ ರಮೇಶ್ ಕುಮಾರ್ ಎಲ್ಲರನ್ನೂ 10ನೇ ಶೆಡ್ಯೂಲ್ನ ಪ್ರಕಾರ ಅನರ್ಹಗೊಳಿಸಿದ್ದಾರೆ. ಹೀಗಾಗಿ164(1ಬಿ) ಪ್ರಕಾರ ಅತೃಪ್ತರನ್ನು ಅವರ ಅನರ್ಹತೆ ಅವಧಿ ಮುಗಿಯು ವರೆಗೆ ಸಚಿವ ಸ್ಥಾನಕ್ಕಾಗಿ,ನಿಗಮ ಮಂಡಳಿಗಳಿಗಾಗಲಿ ನೇಮಕ ಮಾಡುವಂತಿಲ್ಲ.