ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಉಡುಪಿ ಜಿಲ್ಲೆ ನೀಡಿದ್ದು, ಅವರ ತವರು ಜಿಲ್ಲೆ ಹಾವೇರಿಯ ಪ್ರಭಾರ ನೀಡಲಾಗಿದೆ. ಮುಂದೆ ಬಿ.ಸಿ.ಪಾಟೀಲ ಸಚಿವರಾದರೆ, ಅವರಿಗೆ ಹಾವೇರಿ ಉಸ್ತುವಾರಿ ನೀಡುವ ಸಾಧ್ಯತೆ ಇದೆ. ಚಿತ್ರದುರ್ಗ ಪ್ರತಿನಿಧಿಸುವ ಬಿ. ಶ್ರೀರಾಮುಲು ಬಳ್ಳಾರಿಯತ್ತ ಕಣ್ಣಿಟ್ಟಿದ್ದರು. ಅವರಿಗೆ ರಾಯಚೂರು ಜಿಲ್ಲೆಯ ಉಸ್ತುವಾರಿ ನೀಡಲಾಗಿದ್ದು, ಚಿತ್ರದುರ್ಗ ಜಿಲ್ಲೆಯ ಪ್ರಭಾರ ಹೊಣೆ ಇದೆ.