‘ಮಧ್ಯಾಹ್ನ ಕೇವಲ ಒಂದು ಗಂಟೆ ಊಟಕ್ಕೆ ಹೊರಗೆ ಕಳುಹಿಸಿದ್ದನ್ನು ಬಿಟ್ಟರೆ ಅಧಿಕಾರಿಗಳು ನನ್ನನ್ನು ಸತತ ವಿಚಾರಣೆಗೆ ಒಳಪಡಿಸಿದ್ದಾರೆ. ಸೋಮವಾರ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಾಗಿದೆ. ಗೌರಿ ಹಬ್ಬದ ಅಂಗವಾಗಿ ಹಿರಿಯರಿಗೆ ಎಡೆ ಕೊಡುವ ಪೂಜೆ ನೆರವೇರಿಸುವುದರಿಂದ ಸೋಮವಾರ ವಿಚಾರಣೆಗೆ ಬರುವುದು ಅಸಾಧ್ಯ ಎಂದು ಹೇಳಿದರೂ, ವಿಚಾರಣೆಗೆ ಬರುವಂತೆ ಸೂಚಿಸಲಾಗಿದೆ’ ಎಂದು ರಾತ್ರಿ ಕಚೇರಿಯಿಂದ ಹೊರಬಂದ ಶಿವಕುಮಾರ್ ಸುದ್ದಿಗಾರರಿಗೆ ತಿಳಿಸಿದರು.