ಬೆಂಗಳೂರು: ಸುಮಾರು 50 ದಿನಗಳ ಜೈಲುವಾಸದ ಬಳಿಕ ದಹಲಿಯಿಂದ ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಬಂದಿಳಿರುವ ಕಾಂಗ್ರೆಸ್ ಶಾಸಕ ಡಿ. ಕೆ. ಶಿವಕುಮಾರ್ ಅವರು ಇದೀಗ ಟರ್ಮಿನಲ್ನಿಂದ ಹೊರಕ್ಕೆ ಬರುತ್ತಿದ್ದು, ಅವರನ್ನು ಸ್ವಾಗತಿಸಲು ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದಾರೆ.
ಸಾದಹಳ್ಳಿ ಟೋಲ್ ಗೇಟ್ ಬಳಿ ಸಾವಿರಾರು ಅಭಿಮಾನಿಗಳು ಕೆಲವು ಗಂಟೆಗಳಿಂದ ಕಾಯುತ್ತಿದ್ದು, 600 ಕೆ.ಜಿ. ತೂಕದ 20 ಅಡಿ ಉದ್ದದ ಸೇಬಿನ ಹಾರವನ್ನು ಕ್ರೇನ್ ಮೂಲಕ ಡಿಕೆಶಿ ಅವರಿಗೆ ಹಾಕಲು ಸಿದ್ಧತೆ ನಡೆದಿದೆ. ಕಲಾ ತಂಡಗಳು ಉತ್ಸಾಹದಿಂದ ಪ್ರದರ್ಶನ ಆರಂಭಿಸಿದ್ದು, ಎಲ್ಲೆಡೆ ಸಂಭ್ರಮ ಮನೆಮಾಡಿದೆ.
ಸಾದಹಳ್ಳಿ ಗೇಟ್ ದಾಟಿ ವಿಮಾನನಿಲ್ದಾಣದತ್ತ ತೆರಳುವುದಕ್ಕೆ ಅಭಿಮಾನಿಗಳಿಗೆ ಅವಕಾಶ ಕೊಟ್ಟಿಲ್ಲ. ಅಭಿಮಾನಿಗಳು ಘೋಷಣೆ ಕೂಗುತ್ತಿದ್ದು, ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.