ತಾಲ್ಲೂಕಿನ ಲಕ್ಷ್ಮೀಪುರದಲ್ಲಿ ಗುರುವಾರ ಮಾತನಾಡಿದ ಅವರು, ‘ನಾನು ಯಾರನ್ನೂ ಕಡೆಗಣಿಸಿಲ್ಲ. ನಾನು ಅವರನ್ನು ಕಡೆಗಣಿಸಿದ್ದೇನೆ ಎಂದು ಏಕೆ ಹೇಳಿದ್ದಾರೋ ಗೊತ್ತಿಲ್ಲ. ಕಾಂಗ್ರೆಸ್ನ ಎಲ್ಲ ಮುಖಂಡರು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಮುನ್ನಡೆದಿದ್ದೇನೆ. ಬಾಲಕೃಷ್ಣರಿಗೆ ಅಸಮಾಧಾನ ಇದ್ದರೆ ಅವರು ಸಿದ್ದರಾಮಯ್ಯ ಹಾಗು ಡಿ.ಕೆ.ಶಿವಕುಮಾರ್ ಬಳಿ ಚರ್ಚೆ ಮಾಡಲಿ. ಈ ಬಗ್ಗೆ ಮೊನ್ನೆ ಸಹ ಅವರೊಡನೆ ಮಾತನಾಡಿದ್ದೇನೆ. ಅವರ ಸಹೋದರ ಸಹ ನನ್ನ ಪಕ್ಕದಲ್ಲೇ ಇಂದು ಇದ್ದಾರೆ’ ಎಂದು ಟಾಂಗ್ ನೀಡಿದರು.