ಒಳ್ಳೆ ವ್ಯವಹಾರ ಮಾಡುವಾಗ ಹಾಲಮತದವರನ್ನು ಕರೆಯುತ್ತೇವೆ. ಹಾಗೆಯೇ, ನಾವುಚುನಾವಣೆಯನ್ನು ವಿಶ್ವಾಸ, ನಂಬಿಕೆಯಿಂದ ಮಾಡುತ್ತಿದ್ದೇವೆ.ಶಿವಮೊಗ್ಗದಲ್ಲೂ ಜನ ಹೊಸ ಬದಲಾವಣೆಬಯಸಿದ್ದಾರೆ. ಈ ಬಾರಿ ಭದ್ರಾವತಿಯಲ್ಲಿ ಕಾಂಗ್ರೆಸ್ಹಾಗೂ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಸಣ್ಣ ದೋಷವೂ ಇಲ್ಲದೆ ಚುನಾವಣೆ ಮಾಡುತ್ತಾರೆ. ಕಾಂಗ್ರೆಸ್ನಲ್ಲಿ ಇರಬೇಕು ಎಂದರೆ ಜೆಡಿಎಸ್ ಮುಖಂಡರ ಜತೆ ಒಂದೇ ಕಾರಿನಲ್ಲಿ ತೆರಳಿ ಪ್ರಚಾರ ನಡೆಸಬೇಕು. ಇಲ್ಲದಿದ್ದರೆ ಬೇರೆ ಗಾಡಿ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿದರು.