ಸಂಪ್ರದಾಯದಂತೆ ಗ್ರಾಮದ ಗಂಗಾಮತಸ್ಥ ಸಮುದಾಯಕ್ಕೆ ಸೇರಿದ ಹನುಮಂತಸ್ವಾಮಿಯ ಆರು ಮಂದಿ ಭಕ್ತರು ಮಧ್ಯಾಹ್ನ ಕಾಡಿಗೆ ತೆರಳಿದ್ದರು. ಸಂಜೆ 5ರ ಸುಮಾರಿಗೆ ಬಿಲ್ವಪತ್ರೆ ಮರವನ್ನು ತಂದಾಗ ಭಕ್ತರ ಜಯಘೋಷ ಮುಗಿಲುಮುಟ್ಟಿತು. ಜಾತ್ರಾ ಮಹೋತ್ಸವದಲ್ಲಿ ಬಿಲ್ವಪತ್ರೆ ಮರ ತರುವ ಪವಾಡ ಪ್ರಸಿದ್ಧವಾಗಿದ್ದು, ಇದನ್ನು ನೋಡಲು ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಬಂದಿದ್ದರು.