ಬೆಟ್ಟದಪುರ: ಪಿರಿಯಾಪಟ್ಟಣ ತಾಲ್ಲೂಕಿನ ತಾವರೆಕೆರೆ ಸಮೀಪದ ಈಶ್ವರ ದೇವಾಲಯದ ಬಳಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಚಪ್ಪಲಿ ಇಟ್ಟು ಬುಧವಾರ ಅವಮಾನ ಮಾಡಲಾಗಿದೆ.
ದೇವಾಲಯ ಮುಂಭಾಗದ ರಸ್ತೆಯ ತಡೆಗೋಡೆಗೆ ಅಂಬೇಡ್ಕರ್ ಭಾವಚಿತ್ರವನ್ನು ಒರಗಿಸಿ, ಮಹಿಳೆ ಧರಿಸುವ ಚಪ್ಪಲಿಗಳನ್ನು ಭಾವಚಿತ್ರಕ್ಕೆ ತಾಗುವಂತೆ ಇರಿಸಲಾಗಿದೆ. ಬೆಟ್ಟದಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.