ರೋಟರಿ ಸಂಸ್ಥೆಯು (3190 ಜಿಲ್ಲೆ) ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಜ್ಯೋತ್ಸವದಲ್ಲಿ ಮಾತನಾಡಿದ ಅವರು, ‘ಒಂದು ನಾಡಿನ ಬಗ್ಗೆ, ಭಾಷೆಯ ಬಗ್ಗೆ ಹೆಮ್ಮೆ ಇರುವುದು ರಾಷ್ಟ್ರೀಯತೆಗೆ ವಿರುದ್ಧವಲ್ಲ ಎಂದು ತೋರಿಸುವುದು ನಮ್ಮ ಏಕೀಕರಣ ರೂವಾರಿಗಳ ಉದ್ದೇಶವಾಗಿತ್ತು. ಈ ಕಾರಣದಿಂದ ನೂರಾರು ವರ್ಷಗಳ ಹಿಂದೆಯೇ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ರಚಿಸಿದ್ದರು. ಕೆಪಿಸಿಸಿಯನ್ನು ರಾಜಕಾರಣಿಗಳು ರೂಪಿಸಿದ್ದಲ್ಲ. ನಂತರದಲ್ಲಿ, ರಾಜಕಾರಣಿಗಳು ಈ ಕೆಪಿಸಿಸಿಯನ್ನು ಪಡೆದುಕೊಂಡರು’ ಎಂದರು.