ತುಮಕೂರು: ‘ಶುದ್ಧ ಕುಡಿಯುವ ನೀರಿಲ್ಲ ಎಂದು ಆ ಊರಿನವರು ನನಗೆ ದೂರವಾಣಿ ಮಾಡಿ ಕೇಳುತ್ತಾರೆ. ಎರಡು ತಿಂಗಳಿಂದ ನಿಮಗೆಹತ್ತಾರು ಬಾರಿ ಆದೇಶಿಸಿದ್ದರೂ ನೀರು ಕೊಡಲು ಆಗಿಲ್ಲ. ತಕ್ಷಣ ಶುದ್ಧ ನೀರು ಕೊಡುವ ವ್ಯವಸ್ಥೆ ಮಾಡದೇ ಇದ್ದರೆ ನಿಮ್ಮನ್ನು ನೇಣಿಗೆ ಹಾಕಿ ಬಿಡ್ತೀನಿ’ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಾಲಿನಿ ರಜನೀಶ್ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.