ಹೇಗಾದರೂ ಮಾಡಿ ಬಸ್ನ ವೇಗ ನಿಯಂತ್ರಿಸಲು ಚಾಲಕಈಶ್ವರ್ನಿರ್ಧರಿಸಿದರು. ಎದುರು ಇಳಿಜಾರಿನಲ್ಲಿ ನಿಧಾನವಾಗಿ ಸಾಗುತ್ತಿದ್ದ, ಗೊಬ್ಬರ ತುಂಬಿದ್ದ ಲಾರಿಯ ಹಿಂಭಾಗಕ್ಕೆ ಬಸ್ ಅನ್ನು ಗುದ್ದಿಸಿದರು. ಏಕಾಏಕಿ ಬಸ್ ಡಿಕ್ಕಿ ಹೊಡೆದುದನ್ನುಗಮನಿಸಿದ ಲಾರಿ ಚಾಲಕ ಈರಣ್ಣ, ವಿಚಲಿತರಾಗಲಿಲ್ಲ. ಬಸ್ನಲ್ಲಿ ಏನೋ ತೊಂದರೆಯಾಗಿದೆ ಎಂಬುದನ್ನು ಅರಿತು,ಲಾರಿಯನ್ನು ಮತ್ತಷ್ಟು ನಿಧಾನ ಮಾಡಿದರು.