ಶಿರಸಿ: ಲಾಕ್ಡೌನ್ ಉಲ್ಲಂಘಿಸಿ, ಅನಗತ್ಯವಾಗಿ ಓಡಾಡುವವರ ಮೇಲೆ ಡ್ರೋನ್ ಮೂಲಕ ಕಣ್ಣಿಡಲು ಪೊಲೀಸ್ ಇಲಾಖೆ ಮುಂದಾಗಿದೆ. ನಗರದಲ್ಲಿ ಸೋಮವಾರ ಮಧ್ಯಾಹ್ನದಿಂದ ಈ ಕಾರ್ಯಾಚರಣೆ ನಡೆಯುತ್ತಿದೆ.
ಕೋಟೆಕೆರೆ ಸಮೀಪ 20ಕ್ಕೂ ಹೆಚ್ಚು ಮಕ್ಕಳು ಆಟವಾಡುತ್ತಿರುವುದನ್ನು ಡ್ರೋನ್ನಲ್ಲಿ ಸೆರೆಯಾಗಿರುವ ಚಿತ್ರದಲ್ಲಿ ಗಮನಿಸಿದ ಪೊಲೀಸರು, ತಕ್ಷಣ ಸ್ಥಳಕ್ಕೆ ಭೇಟಿ ನೀಡಿ, ಗುಂಪು ಚದುರಿಸಿದರು. ಸಾಮಾಜಿಕ ಜಾಲತಾಣದ ಮೂಲಕ ಈ ಸಂದೇಶ ಎಲ್ಲೆಡೆ ರವಾನೆಯಾಗುತ್ತಿದ್ದಂತೆ, ಜನರು ಮನೆಯಿಂದ ಹೊರಬರಲು ಹೆದರಿದರು.
ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಮಾರ್ಗದರ್ಶನದಲ್ಲಿ ಶಿರಸಿ, ಭಟ್ಕಳ, ಕಾರವಾರ, ದಾಂಡೇಲಿಯಲ್ಲಿ ಈ ಕಾರ್ಯಾಚರಣೆ ಆರಂಭವಾಗಿದೆ. ಇನ್ನುಳಿದ ಕಡೆಗಳಲ್ಲೂ ಬರುವ ದಿನಗಳಲ್ಲಿ ಇದು ನಡೆಯಲಿದೆ.
‘ಪ್ರಜಾವಾಣಿ’ ಸೋಮವಾರದ (ಮಾ.30) ಸಂಚಿಕೆಯಲ್ಲಿ ‘ಕುವೈತ್ನಲ್ಲಿ ಗುಂಪು ಚದುರಿಸುವ ಡ್ರೋನ್’ ತಲೆಬರಹದ ಅಡಿಯಲ್ಲಿ ಅಲ್ಲಿನ ಸರ್ಕಾರ ಲಾಕ್ಡೌನ್ ಸಂದರ್ಭದಲ್ಲಿ ಡ್ರೋನ್ ಬಳಕೆ ಮಾಡುವುದನ್ನು ಪ್ರಕಟಿಸಿ ಗಮನ ಸೆಳೆದಿತ್ತು.