ಬರದಿಂದಾಗಿಹಿಂಗಾರು ಅವಧಿಯಲ್ಲಿ ಆದಂತಹ ಬೆಳೆ ನಷ್ಟದ ಕುರಿತು ರಾಜ್ಯಕ್ಕೆ ಭೇಟಿ ನೀಡಿದ್ದ ಕೇಂದ್ರ ತಂಡ ವರದಿ ಸಿದ್ಧಪಡಿಸಿತ್ತು. ರೈತರಿಗೆ ಪರಿಹಾರ ನೀಡುವ ಉದ್ದೇಶದಿಂದ ₹2,064 ಕೋಟಿ ಆರ್ಥಿಕ ನೆರವು ಕೋರಿರಾಜ್ಯ ಸರ್ಕಾರವೂ ಕೇಂದ್ರಕ್ಕೆ ಮನವಿ ಸಲ್ಲಿಸಿತ್ತು.ಕೇಂದ್ರ ತಂಡ ಕೃಷಿ ಇಲಾಖೆಗೆ ವರದಿ ಸಲ್ಲಿಸಿದ್ದು, ಗೃಹ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವಉನ್ನತ ಮಟ್ಟದ ಸಮಿತಿ(ಎಚ್ಎಲ್ಸಿ)ಪರಿಹಾರ ಕುರಿತು ಇನ್ನಷ್ಟೇ ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.