ದೂದ್ಸಾಗರ್ ಬಳಿ ರೈಲು ಮಾರ್ಗದಲ್ಲಿ ಗುಡ್ಡ ಕುಸಿತ: ಸಂಚಾರ ರದ್ದು

ಹುಬ್ಬಳ್ಳಿ: ಭಾರಿ ಮಳೆಯಿಂದಾಗಿ, ದೂದ್ಸಾಗರ್ ಜಲಪಾತದ ಬಳಿಯ ಕ್ಯಾಸಲ್ರಾಕ್– ಕುಲೇಂ ರೈಲು ಮಾರ್ಗದಲ್ಲಿ ಮಂಗಳವಾರ ಮಧ್ಯಾಹ್ನ ಗುಡ್ಡ ಕುಸಿದು ಹಳಿಯ ಮೇಲೆ ಬಿದ್ದಿದೆ.
ಇದರಿಂದಾಗಿ ಆ ಮಾರ್ಗವಾಗಿ ಸಾಗಬೇಕಿದ್ದ ಹುಬ್ಬಳ್ಳಿ–ನಿಜಾಮುದ್ದೀನ್ ಎಕ್ಸ್ಪ್ರೆಸ್ ಹಾಗೂ ವಾಸ್ಕೊ–ಬೆಂಗಳೂರು ರೈಲುಗಳ ಸಂಚಾರವನ್ನು ನೈರುತ್ಯ ರೈಲ್ವೆ ರದ್ದುಪಡಿಸಿದೆ. ವಾಸ್ಕೊ–ನಿಜಾಮುದ್ದೀನ್ ಮತ್ತು ಎರ್ನಾಕುಲಂ– ಪುಣೆ ವೀಕ್ಲಿ ಎಕ್ಸ್ಪ್ರೆಸ್ ರೈಲುಗಳ ಮಾರ್ಗ ಬದಲಿಸಲಾಯಿತು.
ಮಣ್ಣು ತೆರವುಗೊಳಿಸಿದ ನಂತರ ರಾತ್ರಿ 9.30ಕ್ಕೆ ರೈಲು ಸಂಚಾರ ಮತ್ತೆ ಆರಂಭವಾಯಿತು. ನೈರುತ್ಯ ರೈಲ್ವೆ ಹುಬ್ಬಳ್ಳಿ ವಿಭಾಗೀಯ ವ್ಯವಸ್ಥಾಪಕ ರಾಜೇಶ್ ಮೋಹನ್ ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆ ಪರಿಶೀಲಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.