‘ಆ್ಯಂಬಿಡೆಂಟ್’ ಕಂಪನಿಯ ಫರೀದ್, ರೆಡ್ಡಿ ಅವರ ಸೂಚನೆಯಂತೆ ಆಭರಣ ವ್ಯಾಪಾರಿ ರಮೇಶ್ ಕೊಠಾರಿಯ ಬ್ಯಾಂಕ್ ಖಾತೆಗೆ ₹ 20 ಕೋಟಿ ಹಾಕಿದ್ದ. ಆತ ಹಣಕ್ಕೆ ಪ್ರತಿಯಾಗಿ 57 ಕೆ.ಜಿ ಚಿನ್ನದ ಗಟ್ಟಿಗಳನ್ನು ಬಳ್ಳಾರಿಯ ‘ರಾಜ್ಮಹಲ್’ ಜ್ಯುವೆಲರ್ಸ್ ಮಳಿಗೆ ಮಾಲೀಕ ರಮೇಶ್ಗೆ ತಲುಪಿಸಿದ್ದ. ಆ ರಮೇಶ್ನೇ ಚಿನ್ನದ ಗಟ್ಟಿಗಳನ್ನು ರೆಡ್ಡಿಗೆ ಮುಟ್ಟಿಸಿದ್ದರು ಎಂಬ ಸಂಗತಿ ಇದುವರೆಗಿನ ತನಿಖೆಯಿಂದ ಗೊತ್ತಾಗಿದೆ.