ಪೂರ್ವ ಪರಂಪರೆಯಂತೆ ಬೆಳಿಗ್ಗೆ ನಾಂದಿ ಮಂಗಲಪೂಜೆ ನಿಮಿತ್ತ ಕ್ಷೇತ್ರದ ವಿಂಧ್ಯಗಿರಿ, ಚಂದ್ರಗಿರಿ ಹಾಗೂ ನಗರದ ಎಲ್ಲ ಬಸದಿಗಳಲ್ಲಿ ಏಕಕಾಲಕ್ಕೆ ತೀರ್ಥಂಕರರಿಗೆ ಪಂಚಾಮೃತ ಅಭಿಷೇಕ ಪೂಜೆ, ಶಾಸನ ದೇವತೆಗಳಿಗೆ ಪೂಜೆ ಮತ್ತು ಮಹಾಮಸ್ತಕಾಭಿಷೇಕದ ಪೂಜಾದ್ರವ್ಯಗಳ ಸಂಗ್ರಹ ಹಾಗೂ ಶುದ್ಧೀಕರಣ ಯೋಜನೆಯ ಕಾರ್ಯಕ್ರಮವು ಶುಕ್ರವಾರ ಮಧ್ಯಾಹ್ನ 12.37ರಿಂದ 12.47ರ ವರೆಗೆ ಚಾವುಂಡರಾಯ ಸಭಾ ಮಂಟಪದಲ್ಲಿ ನಡೆಯಲಿದೆ.