ಹಿರಿಯ ಮುಖಂಡ ಎಚ್.ಟಿ. ಸಾಂಗ್ಲಿಯಾನ ಪಕ್ಷಕ್ಕೆ ರಾಜೀನಾಮೆ ನೀಡಿದ ಕುರಿತು ಪ್ರತಿಕ್ರಿಯಿಸಿದ ಅವರು, ‘ಕಾಂಗ್ರೆಸ್ ಮಾತ್ರ ಸಾಮಾಜಿಕ ನ್ಯಾಯದ ಪರ ಇದೆ. ಬಿಜೆಪಿ ಒಂದೇ ಒಂದು ಕ್ಷೇತ್ರದಲ್ಲಿ ಇತರ ಹಿಂದುಳಿದ ವರ್ಗದ ಅಭ್ಯರ್ಥಿಗೆ ಟಿಕೆಟ್ ನೀಡಿಲ್ಲ. ಅಷ್ಟೇ ಅಲ್ಲ, ಆ ಪಕ್ಷ ಅಲ್ಪಸಂಖ್ಯಾತ ಸಮುದಾಯವರಿಗೂ ಟಿಕೆಟ್ ನೀಡಿಲ್ಲ. ನಮ್ಮ ಸಂಪುಟದಲ್ಲಿ ಮೂವರು ಅಲ್ಪಸಂಖ್ಯಾತ ಸಂಚಿವರಿದ್ದಾರೆ. ಈ ಬಗ್ಗೆ ಸಾಂಗ್ಲಿಯಾನ ಅವರ ಜೊತೆ ಚರ್ಚೆ ಮಾಡುತ್ತೇವೆ’ ಎಂದರು.