ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರದಲ್ಲಿ ಮೈತ್ರಿ ಸರ್ಕಾರದಿಂದ ಚುನಾವಣಾ ಅಕ್ರಮ: ಬಿಜೆಪಿ ಆರೋಪ

Last Updated 4 ನವೆಂಬರ್ 2018, 9:19 IST
ಅಕ್ಷರ ಗಾತ್ರ

ರಾಮನಗರ:ಇಲ್ಲಿನ ಉಪ ಚುನಾವಣೆಯಲ್ಲಿ‌ ಕೊನೆಯ ಒಂದು ಗಂಟೆ ಅವಧಿಯಲ್ಲಿ ಶೇ 20ಕ್ಕೂ ಹೆಚ್ಚು ಮತದಾನ‌ ನಡೆದಿದ್ದು, ಜೆಡಿಎಸ್- ಕಾಂಗ್ರೆಸ್ ಸೇರಿ‌ ಚುನಾವಣಾ ಅಕ್ರಮ ಎಸಗಿವೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ. ರುದ್ರೇಶ್ ಆರೋಪಿಸಿದರು.

ಬಿಜೆಪಿ ಏಜೆಂಟರನ್ನು ಮತಗಟ್ಟೆಯಿಂದ ದೂರ ಮಾಡಿ, ಕೆಲವು ಕಡೆ ಜೆಡಿಎಸ್ ಕಾಂಗ್ರೆಸ್ ಕಾರ್ಯಕರ್ತರೇ ಅಕ್ರಮವಾಗಿ‌ ಮತದಾನ ಮಾಡಿದ್ದಾರೆ. ಈ ಕುರಿತು ಚುನಾವಣಾ ಆಯೋಗಕ್ಕೆ ದೂರು‌ ನೀಡಲಾಗುವುದು ಎಂದು ಅವರು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

'ಡಿ.ಕೆ. ಶಿವಕುಮಾರ್ ಅವರು ಕಳೆದ ಬುಧವಾರ ರಾತ್ರಿ ದಿಢೀರ್ ಎಂದು ವಿಶೇಷ ವಿಮಾನದಲ್ಲಿ ಬಂದು ಪುನಃ ಬಳ್ಳಾರಿಗೆ ಏಕೆ ವಾಪಸ್ ಆದರು. ಚಂದ್ರಶೇಖರ್ ಕಣದಿಂದ ಹಿಂದೆ‌ ಸರಿಯಲು ಎಷ್ಟು ಹಣದ ಆಮಿಷ ಒಡ್ಡಿದರು ಎಂಬುದು ಗೊತ್ತಿದೆ. ನಾಯಕರ ಒಪ್ಪಿಗೆ ಪಡೆದು ಅದನ್ನೆಲ್ಲ ಬಹಿರಂಗಪಡಿಸುತ್ತೇನೆ' ಎಂದರು.

ರಾಮನಗರವನ್ನು ಪಕ್ಷದ ವರಿಷ್ಠರು ಇನ್ನಾದರೂ ಗಂಭೀರವಾಗಿ ಪರಿಗಣಿಸಬೇಕು. ಲೋಕಸಭೆ ಚುನಾವಣೆಗೆ ನಾವು ಹೇಳಿದ ಅಭ್ಯರ್ಥಿಯನ್ನೇ ಹಾಕಬೇಕು. ಇಲ್ಲವಾದರೆ ಸಾಮೂಹಿಕವಾಗಿ ರಾಜೀನಾಮೆ ನೀಡುತ್ತೇವೆ‌ ಎಂದು ಅವರು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT