ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡಾನೆ ದಾಳಿ: ಆಟೊ ಚಾಲಕ ಪಾರು

Last Updated 21 ಮೇ 2019, 14:22 IST
ಅಕ್ಷರ ಗಾತ್ರ

ಪೊನ್ನಂಪೇಟೆ: ವಿರಾಜಪೇಟೆ ತಾಲ್ಲೂಕಿನ ಕಳತ್ಮಾಡು ಗ್ರಾಮದಲ್ಲಿ ಮಂಗಳವಾರ ಚಲಿಸುತ್ತಿದ್ದ ಆಟೊದ ಮೇಲೆ ಕಾಡಾನೆಯೊಂದು ದಿಢೀರ್‌ ದಾಳಿ ನಡೆಸಿ ಜಖಂಗೊಳಿಸಿದೆ.

ಚಾಲಕ ವಿನುಕುಮಾರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಆಟೊದಲ್ಲಿ ತೆರಳುತ್ತಿದ್ದಾಗ ಎದುರಾದ ಕಾಡಾನೆ ಏಕಾಏಕಿ ದಾಳಿ ಮಾಡಿದೆ. ವಿನುಕುಮಾರ್‌ ತಕ್ಷಣವೇ ಎಚ್ಚೆತ್ತು ಆಟೊ ಬಿಟ್ಟು ತೋಟದೊಳಕ್ಕೆ ಓಡಿ ಪ್ರಾಣ ಉಳಿಸಿಕೊಂಡಿದ್ದಾರೆ.

ಆಟೊ ಜಖಂಗೊಳಿಸಿ ದಾಳಿ ಮುಂದುವರೆಸಿದ ಕಾಡಾನೆ, ಪಕ್ಕದ ತೋಟದಲ್ಲಿನ ಮೂರು ತೆಂಗಿನ ಗಿಡಗಳನ್ನು ಉರುಳಿಸಿ ಘೀಳಿಡುತ್ತಾ ಸುತ್ತಲೂ ಓಡಾಡಿದೆ. ಇದರಿಂದ ಗ್ರಾಮಸ್ಥರೂ ಭಯಗೊಂಡಿದ್ದರು.

ಕಾಡಾನೆ ಹಾವಳಿಯಿಂದ ತೊಂದರೆ ಅನುಭವಿಸುತ್ತಿರುವ ಸ್ಥಳೀಯರು ಕಾಡಾನೆಯನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಯನ್ನು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT