ಕಳೆದ ಕೆಲವು ದಿನಗಳಿಂದ ಅಮ್ಮತ್ತಿ ಗ್ರಾ.ಪಂ. ವ್ಯಾಪ್ತಿಯ ಅಂಜಲಗರೆ, ಪುಲಿಯೇರಿ, ಗೌರಿ ಬಾಗದಲ್ಲಿ ಕಾಡಾನೆ ಹಾವಳಿ ನಿರಂತರವಾಗಿದೆ. ಕಾಫಿತೋಟದಲ್ಲಿ ಬೀಡು ಬಿಡುವ ಕಾಡಾನೆಗಳು ಕಾಫಿಗಿಡಗಳನ್ನು ನಾಶಗೊಳಿಸಿವೆ. ಅಲ್ಲದೆ, ಪುಲಿಯೇರಿ ಗ್ರಾಮದ ಕಾವೇರಿ ಎಸ್ಟೇಟ್, ಗೌರಿ ಎಸ್ಟೇಟ್ ನಲ್ಲಿ ಕಾಡಾನೆಗಳು ದಾಳಿ ನಡೆಸಿ ಕಾಫಿಗಿಡಗಳನ್ನು ದ್ವಂಸ ಮಾಡಿವೆ. ಮತ್ತೊಂದೆಡೆ ಭತ್ತದ ಗದ್ದೆಗಳಿಗೂ ಲಗ್ಗೆ ಇಟ್ಟ ಕಾಡಾನೆ, ನಾಟಿ ಮಾಡಲಾಗಿರುವ ಭತ್ತವನ್ನು ನಾಶ ಮಾಡಿವೆ. ಕಳತ್ಮಾಡು ಗ್ರಾ.ಪಂ ವ್ಯಾಪ್ತಿಯಲ್ಲಿಯೂ ಕಳೆದ ಕೆಲವು ದಿನಗಳಿಂದ ಕಾಡಾನೆ ಹಾವಳಿ ಮುಂದುವರಿದಿದ್ದು, ಭತ್ತದ ಗದ್ದೆಗಳು ಕಾಡಾನೆ ದಾಳಿಗೆ ನಾಶವಾಗಿದೆ.