ತಮ್ಮ ಶಾಲೆಗೆ ಬಂದು ಕೈಯಲ್ಲಿ ಬ್ರಷ್ ಹಿಡಿದ ಯುವಕ ಯವತಿಯರು ಬಣ್ಣ ಬಳಿಯುತ್ತಿರುವುದನ್ನು ನೋಡಿದ ಶಾಲೆಯ ಶಿಕ್ಷಕಿಯರು ಅವರೊಂದಿಗೆ ತಾವೂ ಬ್ರಷ್ ಹಿಡಿದು ಸಾಥ್ ನೀಡಿದರು. ಇಂಟೆಲ್ ಕಂಪನಿಯ ರವಿ ಗೋಪಾಲ್ ಮಾತನಾಡಿ, ‘ನಮ್ಮ ಕೆಲಸದ ಜತೆಯಲ್ಲಿ ಸಮಾಜದಲ್ಲಿನ ಸಾರ್ವಜನಿಕರಿಗೆ ನೆರವಾಗುವಂತಹ ಕೆಲಸ ಮಾಡುವುದು ನಮ್ಮ ಜವಾಬ್ದಾರಿ. ಇತ್ತೀಚೆಗೆ ಬೆಳ್ಳಂದೂರು ಕೆರೆ ಬಳಿ ಗಿಡಗಳನ್ನು ನೆಡಲಾಯಿತು. ಗ್ರಾಮಾಂತರ ಪ್ರದೇಶದಲ್ಲಿನ ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸುವುದು ಮತ್ತು ಅಲ್ಲಿನ ಮಕ್ಕಳಿಗೆ ಆಂಗ್ಲ ಭಾಷೆಯಲ್ಲಿ ಹೆಚ್ಚಿನ ಪ್ರೌಢಿಮೆ ಪಡೆಯುವಲ್ಲಿ ತರಬೇತಿ ನೀಡಲು ಉದ್ದೇಶಿಸಲಾಗಿದೆ’ ಎಂದರು. ಶಿಕ್ಷಣ ಫೌಂಡೇಷನ್ ಸಂಸ್ಥೆ ಸಹಯೋಗದಲ್ಲಿ ಕಾರ್ಯಕ್ರಮ ಕೈಗೊಂಡಿದ್ದು ₹ 1.50 ಲಕ್ಷ ವೆಚ್ಚದಲ್ಲಿ ಬಣ್ಣ ಬಳಿಯಲಾಗಿದೆ ಎಂದು ಫೌಂಡೇಷನ್ನ ತಾಲ್ಲೂಕು ಸಮನ್ವಯಾಧಿಕಾರಿ ರಾಜಣ್ಣ ಹೇಳಿದರು.