ಮಾಗಡಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಬಾಲಕೃಷ್ಣ ಪರೋಕ್ಷವಾಗಿ ಡಿ.ಕೆ. ಸಹೋದರರ ವಿರುದ್ಧ ಕಿಡಿಕಾರಿದರು. ‘ಕಾಂಗ್ರೆಸ್ ಪಕ್ಷದಲ್ಲಿ ನನಗೆ ಕೊಡಬೇಕಾದ ಗೌರವ ಕೊಡದೇ ಮೂಲೆಗುಂಪು ಮಾಡಲಾಗಿದೆ. ಕಾಂಗ್ರೆಸ್ ನಾಯಕರು ಸ್ಥಳೀಯ ಶಾಸಕ ಎ.ಮಂಜುನಾಥ್ ಜೊತೆ ತಿರುಗಾಡುತ್ತಾರೆ. ಸಂಸದ ಡಿ.ಕೆ. ಸುರೇಶ್ ಸಹ ಅವರ ಜೊತೆಯೇ ಕಾರ್ಯಕ್ರಮಗಳಿಗೆ ಹೋಗುತ್ತಾರೆ. ನನ್ನನ್ನು ಆಹ್ವಾನಿಸುವ ಸೌಜನ್ಯ ತೋರುತ್ತಿಲ್ಲ’ ಎಂದರು.