‘ರೈಲು ಯಶವಂತಪುರ ನಿಲ್ದಾಣ ತಲುಪಿದಾಗ, ಎ.ಸಿ ಬೋಗಿಯಲ್ಲಿದ್ದ ಸಾಗರ್, ಮೂತ್ರ ವಿಸರ್ಜನೆಗೆ ಹೋಗುವುದಾಗಿ ಸ್ನೇಹಿತರಿಗೆ ಹೇಳಿ ಶೌಚಾಲಯದತ್ತ ಹೋಗಿದ್ದರು. ರೈಲು, ನಿಲ್ದಾಣದಿಂದ ತುಮಕೂರಿನತ್ತ ಹೊರಟಿತ್ತು. ಸಾಗರ್, ವಾಪಸ್ ಬಂದಿರಲಿಲ್ಲ. ಅನುಮಾನಗೊಂಡ ಸ್ನೇಹಿತರು, ಅವರ ಮೊಬೈಲ್ಗೆ ಕರೆ ಮಾಡಿದರೂ ಪ್ರತಿಕ್ರಿಯೆ ಬಂದಿರಲಿಲ್ಲ. ಆ ಬಗ್ಗೆ ಸ್ನೇಹಿತರು ಹೇಳಿಕೆ ನೀಡಿದ್ದಾರೆ’ ಎಂದು ಹೇಳಿದರು.