‘ಕೆರೆ ತುಂಬಿದರೆ ನಮ್ಮ ಭಾಗದ ಭೂಮಿಯ ಅಂತರ್ಜಲ ಹೆಚ್ಚಿ ಕೃಷಿಗೆ, ಕುಡಿಯುವ ನೀರಿಗೆ ಅನುಕೂಲವಾಗುತ್ತದೆ. ಆದ್ದರಿಂದ ಕಬಿನಿ ನದಿಯಿಂದ ಕೆರೆಗಳಿಗೆ ನೀರು ಹರಿಸಬೇಕು’ ಎಂದು ರೈತರು ಒತ್ತಾಯಿಸಿದರು. ಕಾವೇರಿ ನೀರಾವರಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರವೀಶ್, ನೀರೆತ್ತುವ ಯಂತ್ರಗಳನ್ನು ಚಾಲನೆ ಮಾಡಿಸಿ ನೀರು ಹರಿಸಿದ ನಂತರವಷ್ಟೇ ರೈತರು ಧರಣಿ ವಾಪಸ್ ಪಡೆದು ಗ್ರಾಮಗಳಿಗೆ ತೆರಳಿದರು.