ಆರೋಪಿ ತಂದೆ ನಾರಾಯಣರೆಡ್ಡಿ ಕೊಂಕಲದ ವಿರುದ್ಧ ಪತ್ನಿಯು ಬಳಗಾನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪಿಯುಸಿ ವಿಜ್ಞಾನ ಓದು ಪೂರ್ಣಗೊಳಿಸಿದ್ದ ನಂದಿನಿ ಬಿಎಸ್ಸಿಗೆ ಸೇರಿಕೊಳ್ಳಲು ಬಯಸಿದ್ದಳು. ಆದರೆ, ನಾರಾಯಣರೆಡ್ಡಿ ನಿರಾಕರಣೆ ಮಾಡುತ್ತಾ ಬಂದಿದ್ದರು. ಅರ್ಜಿ ಹಾಕಿ ಬರೋಣ ಎಂದು ಮಗಳಿಗೆ ಸುಳ್ಳು ಹೇಳಿ ಕರೆದುಕೊಂಡು ಹೋಗಿ ಈ ರೀತಿ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.