ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ಸಿ ಓದುತ್ತೇನೆಂದ ಪುತ್ರಿಗೆ ಬೆಂಕಿ ಇಟ್ಟ ತಂದೆ!

Last Updated 1 ಏಪ್ರಿಲ್ 2019, 13:38 IST
ಅಕ್ಷರ ಗಾತ್ರ

ಮಸ್ಕಿ (ರಾಯಚೂರು):ರಾಯಚೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಬಿಎಸ್‌ಸಿ ಅಗ್ರಿ ಓದುತ್ತೇನೆ ಎಂದು ಹಠ ಹಿಡಿದ ಪುತ್ರಿಯನ್ನು ಕರೆದುಕೊಂಡು ಹೋಗಿದ್ದ ತಂದೆಯು ಸೀಮೆ ಎಣ್ಣೆ ಸುರಿದು ಸುಟ್ಟುಹಾಕಿರುವ ಘಟನೆ ಜಿಲ್ಲೆಯ ಮಸ್ಕಿ ತಾಲ್ಲೂಕಿನ ಸುಂಕನೂರು ಗ್ರಾಮದಲ್ಲಿ ನಡೆದಿದೆ.

ನಂದಿನಿ (20) ಸುಟ್ಟು ಕರಕಲಾಗಿದ್ದು, ಗ್ರಾಮದ ಹೊರವಲಯ ಕಾಲುವೆ ಪಕ್ಕದ ಜಾಲಿಗಿಡಗಳ ಮಧ್ಯ ಸೋಮವಾರ ಬೆಳಿಗ್ಗೆ ಶವ ಪತ್ತೆಯಾಗಿದೆ.

ಆರೋಪಿ ತಂದೆ ನಾರಾಯಣರೆಡ್ಡಿ ಕೊಂಕಲದ ವಿರುದ್ಧ ಪತ್ನಿಯು ಬಳಗಾನೂರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪಿಯುಸಿ ವಿಜ್ಞಾನ ಓದು ಪೂರ್ಣಗೊಳಿಸಿದ್ದ ನಂದಿನಿ ಬಿಎಸ್‌ಸಿಗೆ ಸೇರಿಕೊಳ್ಳಲು ಬಯಸಿದ್ದಳು. ಆದರೆ, ನಾರಾಯಣರೆಡ್ಡಿ ನಿರಾಕರಣೆ ಮಾಡುತ್ತಾ ಬಂದಿದ್ದರು. ಅರ್ಜಿ ಹಾಕಿ ಬರೋಣ ಎಂದು ಮಗಳಿಗೆ ಸುಳ್ಳು ಹೇಳಿ ಕರೆದುಕೊಂಡು ಹೋಗಿ ಈ ರೀತಿ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT