ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಉದ್ಯಾನದ ಕುಂದುಕರೆ ವಲಯಕ್ಕೆ ಸೇರಿದ ಮಂಗಲ ಗ್ರಾಮದ ಬಳಿ ಶುಕ್ರವಾರ ಬೆಂಕಿ ಕಾಣಿಸಿಕೊಂಡ ಪರಿಣಾಮ ಗೋಮಾಳಕ್ಕೆ ಸೇರಿದ ಬೆಟ್ಟದ ಅರ್ಧಭಾಗ ಸುಟ್ಟುಹೋಗಿದೆ.
ಖಾಸಗಿ ಜಮೀನಿನಿಂದ ಬೆಂಕಿ ಹರಡಿ ಬೆಟ್ಟವನ್ನು ಅವರಿಸಿಕೊಂಡಿದೆ. ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರಿಂದ ಕೆಲ ಪ್ರದೇಶ ಸುಟ್ಟು ಹೋಗಿದೆ. ಆದರೆ, ಈ ಪ್ರದೇಶಗಳು ರಾಷ್ಟ್ರೀಯ ಅಭಯಾರಣ್ಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಎಸಿಎಫ್ ನಟರಾಜ್ ತಿಳಿಸಿದರು.