ಉಡುಪಿ: ದುಬೈನಲ್ಲಿ ಕೆಲವು ಭಾರತೀಯ ಮೀನುಗಾರರು ಪತ್ತೆಯಾಗಿದ್ದು, ಶೀಘ್ರವೇ ಅವರನ್ನು ತಾಯ್ನಾಡಿಗೆ ಕರೆತರಲಾಗುವುದು ಎಂದು ಸಂಸದೆ ಹಾಗೂ ಬಿಜೆಪಿ ರಾಷ್ಟ್ರೀಯ ವಕ್ತಾರೆ ಮೀನಾಕ್ಷಿ ಲೇಖಿ ಹೇಳಿದರು.
ಡಿಸೆಂಬರ್ನಲ್ಲಿ ಮಲ್ಪೆಯಿಂದ ನಾಪತ್ತೆಯಾಗಿರುವ ಮೀನುಗಾರರ ಪತ್ತೆಗೆ ಕೇಂದ್ರ ಸರ್ಕಾರ ನಿರಂತರ ಶೋಧ ನಡೆಸುತ್ತಿದೆ. ದುಬೈನಲ್ಲಿ ಭಾರತದ ಮೀನುಗಾರರು ಪತ್ತೆಯಾಗಿರುವ ಕುರಿತು ಮಾಹಿತಿ ಸಿಕ್ಕಿದೆ ಎಂದರು.